ಮಾನಸ ಸಂಪುಟ ೬ ಸಂಚಿಕೆ ೯ ಸೆಪ್ಟೆಂಬರ್ 1992
Sobre o livro
‘ನಮ್ಮ ಮಾನಸ’ ತಿಂಗಳ ಪತ್ರಿಕೆ ಪ್ರಾರಂಭವಾದದ್ದು ೧೯೮೬ರಲ್ಲಿ. ಸ್ವಾಯತ್ತ ಮಹಿಳಾ ಸಂಸ್ಥೆ ಮಾನಸದ ಭಾಗವಾಗಿದ್ದ ‘ನಮ್ಮ ಮಾನಸ’ ಪತ್ರಿಕೆ ಮಹಿಳಾ ಚಳವಳಿಯ ಮುಖವಾಣಿಯಾಗಿ ಸುಮಾರು ೨೮ವರ್ಷ ಕರ್ನಾಟಕದಲ್ಲಿ ತನ್ನ ಛಾಪು ಮೂಡಿಸಿದೆ. ‘ ಮಾನವಿ’ ಹೆಸರಿನಲ್ಲಿ ಪ್ರಾರಂಭವಾದ ಈ ಪತ್ರಿಕೆ ‘ಮಾನಸ ತಿಂಗಳ ಪತ್ರಿಕೆ’, ‘ಮಾನಸ’ ಹಾಗೂ ರಿಜಿಸ್ಟರ್ ಆಗುವಾಗ ‘ನಮ್ಮ ಮಾನಸ’ ವಾಗಿ ರೂಪುಗೊಂಡು ಕೆಲಸ ಮಾಡಿದೆ. ಸ್ವಾಯತ್ತತೆಯನ್ನು ‘ಮಾನಸ ಪತ್ರಿಕೆ’ ಅರ್ಥೈಸಿದ್ದು ಹೀಗೆ. ಕೇಡರ್ ಅಥವಾ ಲೀಡರ್ ಕಲ್ಪನೆ ಇಲ್ಲಿ ಇರಲಿಲ್ಲ. ಸಾಮುದಾಯಕ ನಾಯಕತ್ವಕ್ಕೆ ಮನ್ನಣೆ ಕೊಡುವುದಾಗಿತ್ತು. ಯಾವುದೇ ಸಾಂಸ್ಥಿಕ ಸ್ವರೂಪ, ರಚನೆ ಬೇಡ ಎನ್ನುವುದು ಎಲ್ಲರ ನಿಲುವಾಗಿತ್ತು. ಸರ್ಕಾರ ಅಥವಾ ವಿದೇಶೀ ನೆರವು ಯಾವ ಹಂಗಿಗೂ ಒಳಗಾಗದೇ ಪತ್ರಿಕೆಯನ್ನು ಪ್ರಕಟಿಸುವುದು ಮುಖ್ಯ ಉದ್ದೇಶವಾಗಿತ್ತು. ಚಳುವಳಿಗಳಲ್ಲಿ ಪಾರದರ್ಶಕತೆ ಇರುವ ಹಾಗೆ ಪತ್ರಿಕೆಯ ನಿಲುವು, ಧನಸಹಾಯ, ಸಾಂಸ್ಥಿಕ ರಚನೆಯಲ್ಲೂ ಪಾರದರ್ಶಕತೆ ಇದ್ದರೆ ಮಾತ್ರ ಚಳವಳಿ ಆಥವಾ ಪತ್ರಿಕೆ ಉಳಿಸಿ ಬೆಳೆಸುವುದು ಸಾಧ್ಯ ಎನ್ನುವ ಬದ್ಧತೆಯೊಂದಿಗೆ ೧೯೮೬ರಲ್ಲಿ ಮಾನಸ ಮಹಿಳಾ ವೇದಿಕೆ ಮಾನಸ ಮಹಿಳಾಪತ್ರಿಕೆಯನ್ನು ಪ್ರಾರಂಭಗೊಳಿಸಿತ್ತು. ಸಾಂಸ್ಥಿಕ ರಚನೆಗೆ ಬಂದಾಗ, ಮಾನಸದ ಸಭೆಗಳಿಗಾಗಿ ಮಾನಸ ಬಳಗದವರ ಮನೆಗಳನ್ನೇ ಹೆಚ್ಚಾಗಿ ಬಳಸಿಕೊಂಡಿದ್ದೇವೆ. ಚಳವಳಿಗಾಗಿ ಸಾರ್ವಜನಿಕ ಸ್ಥಳ ಉಪಯೋಗಿಸಬೇಕೆನ್ನುವ ನಂಬಿಕೆಗಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಬಹಳ ವರ್ಷಗಳ ಕಾಲ ಪತ್ರಿಕೆಯ ಸಭೆ ನಡಸಿದ್ದೇವೆ. ಸಂಗ್ರಹವಾದ ಹಣ ಪತ್ರಿಕೆಗಾಗಿಯೇ ಖರ್ಚಾಗುತ್ತಿದ್ದರಿಂದ ಹಣವನ್ನು ಬ್ಯಾಂಕಿನಲ್ಲಿ ಫಿಕ್ಸೆಡ್ ಇಡುವುದಾಗಲೀ, ಬಡ್ಡಿಯ ಹಣ ಬಳಸುವುದಾಗಲೀ ನಾವು ಮಾಡಿಯೇ ಇಲ್ಲ. ಆ ನಂಬಿಕೆ ಮಾನಸಕ್ಕೆ ಇರಲೂ ಇಲ್ಲ. ೧೯೮೬ ರಿಂದ ೨೦೧೩ರ ವರೆಗೆ ಮಹಿಳಾ ಚಳವಳಿಯ ಆಂದೋಲನಗಳನ್ನು ಮಾತ್ರವಲ್ಲದೇ ರೈತ, ಕಾರ್ಮಿಕ, ಮೂರನೇ ಲಿಂಗಿಗಳು, ದಲಿತರು , ಒಂಟಿ ಮಹಿಳೆಯರು, ಬೀದಿ ಕಸ ಗುಡಿಸುವ ಮಹಿಳೆಯರು, ಆಸಂಘಟಿತ ವಲಯ, ಗಾರ್ಮೆಂಟ್ ಮಹಿಳೆಯರು ಹೀಗೆ ಹಲವಾರು ಮಾನವತೆ ನೆಲೆಯ ಹೋರಾಟಗಳ ದಾರ್ಶನಿಕತೆಯನ್ನು ಸ್ತ್ರೀವಾದಿ ನೆಲೆಯಲ್ಲಿ ಬಿಂಬಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಸಂವಾದಕ್ಕೆ ‘ನಮ್ಮ ಮಾನಸ’ ದಾರಿಮಾಡಿಕೊಟ್ಟಿದೆ. ಸಾಹಿತ್ಯ, ಇತಿಹಾಸ, ವಿಜ್ಞಾನ ಇಂತಹ ಕ್ಷೇತ್ರಗಳನ್ನು ಸ್ತ್ರೀವಾದಿ ನೆಲೆಯಲ್ಲಿ ಶೋಧಿಸಲಾಗಿದೆ. ಈ ಸಂವಾದದ ಮೂಲಕ ಸ್ತ್ರೀವಾದಿ ನೆಲೆಯ ವೈಚಾರಿಕತೆ ಮಾನವೀಯ ಸ್ತರದ ಎಲ್ಲಾ ಹೋರಾಟಗಳನ್ನು ತನ್ನ ಒಡಲಲ್ಲಿ ಒಳಗೊಂಡು ಹೋರಾಟಗಳನ್ನು ರೂಪಿಸುವ, ಚಿಂತಿಸುವ ದಾರ್ಶನಿಕತೆಯ ಜರೂರಿಯನ್ನು ‘ನಮ್ಮ ಮಾನಸ’ ಪತ್ರಿಕೆ ಸದಾ ಎತ್ತಿ ಹಿಡಿಯುತ್ತಲೇ ಬಂದಿದೆ. ೨೦೨೪ ರಲ್ಲಿ ಡಿಜಿಟಲೈಜೇಷನ್ ಮಾಡಿಸುವಂತಹ ಅವಕಾಶ ನಮಗೆ ಒದಗಿ ಬಂದಿದೆ. ೨೮ ವರ್ಷ ತಂದ ಪತ್ರಿಕೆಗಳನ್ನು ಮತ್ತೆ ಜನರಿಗೆ ತಲುಪಿಸುವ ಸದವಕಾಶ. ಸ್ವಾಯತ್ತ ಮಹಿಳಾ ಹೋರಾಟದ ಚರಿತ್ರೆಯನ್ನು ವರ್ತಮಾನದೊಂದಿಗೆ ಬೆಸೆಯುತ್ತಾ ಹೊಸ ಬೆಳಕಿನ ಸ್ತ್ರೀವಾದಿ ನೋಟಗಳು ಮಾನವೀಯ ನೆಲೆಯಲ್ಲಿ ಈ ಹೊತ್ತಿನ ಬದುಕನ್ನು ಕೊಂಡು ಹೋಗುವಲ್ಲಿ ಸಹಾಯವಾಗಲಿ ಎಂಬ ಆಶಯದಿಂದ ಈ ಡಿಜಿಟಲೈಜೇಶನ್. ನೀವು ಇದರ ಉಪಯೋಗ ಪಡೆದುಕೊಂಡಲ್ಲಿ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ. ಮಾನಸ ಪತ್ರಿಕೆಯ ಡಿಜಿಟಲೀಕರಣವನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ, ಗಾಂಧಿ ಭವನ ಬೆಂಗಳೂರಿನ ಜಯಪ್ರಕಾಶ್ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ನೆರವೇರಿಸಲಾಗಿದೆ. ಈ ಪತ್ರಿಕೆಯನ್ನು ಸುಲಭವಾಗಿ ಕನ್ನಡಿಗರಿಗೆ ದೊರಕಿಸಲು ಸಂಚಯ https://nammamanasa.sanchaya.net ತಾಣವನ್ನು ರೂಪಿಸಿದೆ.
Detalhes
O Que a Galera Achou
Entre pra avaliar e comentar
EntrarNinguém falou nada ainda. Seja a primeira pessoa corajosa a dar sua opinião.